Shri Krishna Nooraru Geethegalu - 284
ಮೂಲರೂಪರ ಮುಂದೆ ನಲಿವ ಯತಿಯ ನೋಡಿರೊ
ಭವದ ಭಂಗವ ನೀಗಿ ಸುಕೃತದ ಗತಿಯು ಕಾಣಿರೊ
ಪೂರ್ಣಚಂದಿರ ವದನ ಸುಂದರ ಗುರುಸುಧೀಂದ್ರರ ಶಿಷ್ಯರ
ದ್ವೈತದಂಬುಧಿಯೊಳಗೆ ನಗುವ ಭುವನಗಿರಿಯ ರಾಯರ (೧)
ಮೂಲರಾಮರ ದಿವ್ಯಚರಣವ ನಂಬಿ ಭಜಿಸಿದ ಹನುಮರ
ಕಳೆದು ಕಲಿಯೊಳು ನರರ ಅನ್ಯವ ಮುಕುತಿಯೀಯುವ ದೇವರ (೨)
ತುಂಗಾತೀರದ ವೃಂದಾವನದೊಳು ನಿಂತು ಎಮ್ಮನು ಕಾವರ
ಶ್ರೀನಿವಾಸ ವಿಠಲ ನೇಮಕ ಮಂತ್ರಾಲಯದ ಪೂಜ್ಯರ (೩)
ಮೂಲರೂಪರ ಮುಂದೆ ನಲಿವ ಯತಿಯ ನೋಡಿರೊ
ಭವದ ಭಂಗವ ನೀಗಿ ಸುಕೃತದ ಗತಿಯು ಕಾಣಿರೊ
ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೯.೨೦೧೨

0 Comments:
Post a Comment
Subscribe to Post Comments [Atom]
<< Home